ಯುಗಾದಿ ಬರುತಿದೆ

ಯುಗಾದಿ ಬರುತಿದೆ
ಹೊಸಯುಗಾದಿ ಬರುತಿದೆ|
ಎಲ್ಲೆಡೆ ಹಸಿರ ಸಿರಿಯು ಚಿಗುರಿ
ಬೇವುಹೊಮ್ಮಿ ಮಾವು ಚಿಮ್ಮಿ
ನಮಗೆ ಹರುಷ ತರುತಿದೆ
ಹೊಸ ವರುಷ ಬರುತಿದೆ
ನವಯುಗಾದಿ ಬರುತಿದೆ||

ವನರಾಶಿ ನವ್ಯನವಿರಾಗಿ
ಮೈಯತಳೆದು ಬಾಗಿ ತೂಗಿ|
ಸಸ್ಯ ಶ್ಯಾಮಲೆ ಕಂಪಬೀರಿ ಕೈಯಬೀಸಿ
ಕರೆಯುತಿದೆ ಹೊಸವರುಷವ||

ಹಳೆಯ ಕಹಿಯು ಎಲ್ಲಾಮರೆತು
ಬರೀ ಸಿಹಿಯು ಮಾತ್ರ ಉಳಿಯಲಿ|
ಹೊಸ ಬಗೆಯ ಸ್ನೇಹ ಪ್ರೀತಿ ಚಿಗುರಿ
ಸಂಯಮದಲಿ ಎಲ್ಲಾ ಸೇರಿ
ಹೊಸವರ್ಷವ ಸ್ವಾಗತಿಸವ ಬನ್ನಿರಿ||

ಪ್ರಕೃತಿಯಂತೆ ಪ್ರತೀವರ್ಷ
ನಮ್ಮಲಿ ನವಜೀವ ಮೈತುಂಬಲಿ|
ಹೊಸ ಉತ್ಸಾಹದಿಂದ
ನಿತ್ಯಜೀವನ ಸುಗಮ ಸಾಗಲಿ|
ಎಲ್ಲರಿಗೂ ಒಳ್ಳೆಯದಾಗಲೆಂದು
ಬಯಸಿ ಹೊಸಯುಗಾದಿಯ
ಆಚರಿಸುವ ಬನ್ನಿರೆಲ್ಲಾ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಸ್ಯ ಕಾಸಿಯ ಮ್ಯೂಸಿಯಂ
Next post ನಿನ್ನ ತೊರೆದು ಇನ್ನೇನು

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

cheap jordans|wholesale air max|wholesale jordans|wholesale jewelry|wholesale jerseys